Friday, January 5, 2007

ಕಲ್ಯಾಣಕಿರಣ ಹೊತ್ತಿಸಲಿ ಬಾಳಿನ ಆಶಾಕಿರಣ

"ಬಸವಾ ಬಸವಾ ಎಂದಡೆ ಪಾಪ ದೆಸೆಗೆಟ್ಟು ಹೋಗುವುದು ಬಸವನ ಪಾದವ ನಂಬಿದ ಭಕ್ತರು ಹಸನಾದರಯ್ಯ ಸರ್ವಜ್ಞ".ಎಂದು ಸರ್ವಜ್ಞ ಹಾಡಿ ಹೊಗಳಿರುವಂತೆ ಗುರುಬಸವಣ್ಣನವರು 12ನೇಯ ಶತಮಾನ ಕಂಡ ಮಹಾ ಮಾನವತಾವಾದಿ.


ಬ್ರೀಟಿಷ ತತ್ವಜ್ಞಾನಿ ಆರ್ಥರ್ ಮೈಲ್ಸ್ "WHAT EVER THE LEGEND MAY SAY ABOUT LORD BASAVA THE FACT IS FULLY CLEAR THAT HE IS THE FIRST FREE THINKER OF THE INDIA AND ANUBHAV MANTAP IS THE FIRST PARLIMENT IN THE WORLD" ಎಂದು ಹೇಳಿದಂತೆ "ಭಾರತದ ದಂತ ಕಥೆಗಳು ಗುರು ಬಸವಣ್ಣನವರ ಬಗ್ಗೆ ಏನೇ ಹೇಳಲಿ ಅವರೊಬ್ಬ ಭಾರತದ ಪ್ರಪ್ರಥಮ ಸ್ವತಂತ್ರ ವಿಚಾರವಾದಿ ಮತ್ತು ಅನುಭವ ಮಂಟಪ ಭಾರತದ ಮೊದಲ ಸಂಸತ್ತು" ಎಂದು ಹೇಳಿರುವಂತೆ ನೊಂದ ಜನರ ಆಶಾಕಿರಣವಾಗಿ, ಸಮಾಜದಲ್ಲಿ ಆಳವಾಗಿ ಬೇರುರಿದ್ದ ಕಂದಾಚಾರ, ಮೂಡಾಚಾರವನ್ನು ಬೇರುಸಮೇತ ಕಿತ್ತು ಹಾಕಿ, ಕಾಯಕ ಪ್ರಜ್ಞೆ ಮತ್ತು ದಾಸೋಹದ ಕುರಿತು ಹೊಸ ಪ್ರಯೋಗ ಮಾಡುವುದರೊಂದಿಗೆ ಜಗತ್ತಿಗೆ ಆದರ್ಶರಾದ ಜಾಗತೀಕ ಪುರುಷ-ಶ್ರೀ ಬಸವೇಶ್ವರರು.

ಅಂತಹ ಮಹಾಮಹಿಮರು ನೀಡಿರುವ ಜಾಗತೀಕ ಧರ್ಮವನ್ನು, ತತ್ವಗಳನ್ನು ಇಂದು ನಾವುಗಳು ಆಚರಿಸಿ ಉಪದೇಶಿಸುವ ಮಹತ್ತರ ಕಾರ್ಯ ಮಾಡಬೇಕಿದೆ.ಇಂದು ವಿದೇಶಗಳಲ್ಲಿ ಮತ್ತು ಭಾರತದ ಪ್ರಮುಖ ನಗರಗಳಲ್ಲಿ ನಾವುಗಳು ಸಾವಿರಾರು ರೂಪಾಯಿಗಳನ್ನು ತೆತ್ತು ವ್ಯಕ್ತಿತ್ವ ವಿಕಸನ ತರಬೇತಿ ಪಡೆಯುತ್ತಿದ್ದವೆಲ್ಲ, ಆ ಎಲ್ಲ ತತ್ವಗಳನ್ನು, ಬದುಕಿನ ವ್ಯಕ್ತಿತ್ವ ನಿರ್ಮಾಣಕ್ಕೆ ಗುರುಬಸವಣ್ಣನವರು ಹನ್ನೆರಡನೇಯ ಶತಮಾನದಲ್ಲಿಯೆ ನೀಡಿ ಹೋಗಿದ್ದಾರೆ, ಅಂತಹ ಮಹಾ ಮಹಿಮರ ಜೀವನಾದರ್ಶಗಳ ಕುರಿತು, ವೈಚಾರಿಕ, ವಾಸ್ತವಿಕ ನೆಲೆಗಟ್ಟಿನ ಮೇಲೆ ಮೂಡಿ ಬರುತ್ತಿರುವ, ಪೂಜ್ಯ ಮಾತಾಜಿಯವರ ನೆತ್ರತ್ವದಲ್ಲಿ , ಭವಿಷ್ಯಕ್ಕೆ ಆಶಾ ಜ್ಯೋತಿಯನ್ನು ಹೊತ್ತಿಸುತ್ತಾ ಮುನ್ನಡೆದಿರುವ ಪತ್ರಿಕೆಯೆ ಕಲ್ಯಾಣ ಕಿರಣ.

ಗುರು ಬಸವಣ್ಣನವರ ಮತ್ತು ಬಸಾವಾದಿ ಶರಣರ ತತ್ವಗಳನ್ನು ಜಗತ್ತಿಗೆ ತಿಳಿಸಿಕೊಡುವ ಮಹೊನ್ನತ ಉದ್ದೇಶದಿಂದ ಕೂಡಲ ಸಂಗಮ ಬಸವ ಧರ್ಮ ಪೀಠದ ಪ್ರಪ್ರಥಮ ಪೀಠಾಧೀಶರಾದ ಲಿಂಗೈಕ್ಯ ಪೂಜ್ಯ ಲಿಂಗಾನಂದ ಅಪ್ಪಾಜಿ ಮತ್ತು ಜಗತ್ತಿನ ಪ್ರಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿಯವರ ಜ್ಞಾನಗರ್ಭದಲ್ಲಿ 1970ರಲ್ಲಿ ಉದಯಿಸಿದ ಈ ಪತ್ರಿಕೆ ಇಂದಿಗೂ ಸಾವಿರಾರೂ ಓದುಗರನ್ನು ದೇಶ ವಿದೇಶಗಳಲ್ಲಿ ಹೊಂದಿದೆ. ಸತತ ಮೂವತ್ತು ವರ್ಷಗಳಿಂದ ಅವ್ಯಾಹತವಾಗಿ ನಾಡಿನ ಬಸವ ಭಕ್ತರಲ್ಲಿ ಭಕ್ತಿ, ಜ್ಞಾನ, ಆಧ್ಯಾತ್ಮದ ದೀಪ್ತಿಯನ್ನು ಹಚ್ಚುತ್ತಾ ಮುನ್ನಡೆದಿರುವ ಕಲ್ಯಾಣ ಕಿರಣ ಅದೆಷ್ಟೋ ಜನತೆಯ ಬಾಳಿನ ಹೊಂಗಿರಣವಾಗಿ ಬೆಳಗಿದೆ, ಬೆಳೆಸಿದೆ.

ಇನ್ನೂ ಮುಂದೆ ನೀವು ಅಂತರಜಾಲದಲ್ಲಿಯೂ ಕಾಣಬಹುದು. ಪೂಜ್ಯ ಮಾತಾಜಿಯವರ ಹರಿತವಾದ ಲೇಖನಗಳು, ವಾಸ್ತವಿಕ ವಿಚಾರಧಾರೆಗಳು, ವೈಚಾರಿಕ ಮಾರ್ಗದರ್ಶನ, ಸಮಾಜದ ಬಗೆಗಿನ ಅವರ ಕಾಳಜಿ ಕುರಿತು ಲೇಖನಗಳು ಇರುತ್ತವೆ.

ಇಂದು ಗಣಕ ಯಂತ್ರದ ಮೂಲಕ ಜಗತ್ತು ಅಂಗೈಯಲ್ಲಿ ಅಡಗಿ ಕುಳಿತಿದೆ ಎನ್ನುವುದಕ್ಕೆ ಇಲ್ಲಿ ಮೂಡಿ ಬರುತ್ತಿರುವ ಈ ಪತ್ರಿಕೆಯೆ ಉತ್ತಮ ನಿದರ್ಶನ, ಒಂದು ಪತ್ರಿಕೆಯಾದರೆ ಆಯಾ ಪ್ರಾಂತ್ಯಗಳಿಗೆ ಮಾತ್ರ ಸಿಮಿತವಾಗಿರುತ್ತವೆ, ಆದರೆ ಈ ಬ್ಲಾಗ್ ಮೂಲಕ ಕರ್ನಾಟಕದಲ್ಲಷ್ಟೆ ಅಲ್ಲದೆ, ಜಗತ್ತಿನ ಯಾವುದೆ ಮೊಲೆಯಲ್ಲಿಯೂ ಸಹ ನಾವು ತೆರೆದು ನೋಡಬಹುದು. ಇಂತಹ ಒಂದು ಅದ್ಭುತ ತಂತ್ರಜ್ಞಾನವನ್ನು ನೀಡಿದ ಆ ಕ್ಷೇತ್ರದ ಮಹನಿಯರಿಗೆ ಅನಂತ ಶರ್ಣಾರ್ಥಿಗಳು.

No comments: